Share To

Friday, 14 October 2022

ತಾಜುಲ್ ಫುಖಹಾ ಫಿಕ್ಹ್ ಕ್ಲಾಸ್


ಉಳ್ಳಾಲ : ಎಸ್ ವೈ ಎಸ್ ಪಟ್ಲ ಬ್ರಾಂಚ್  ವತಿಯಿಂದ ಮಾಸಂಪ್ರತಿ ನಡೆಸುವ ತಾಜುಲ್  ಫುಖಹಾ ಫಿಕ್ಹ್ ಕ್ಲಾಸ್ ಎಸ್ಸೆಸ್ಸೆಫ್ ಪಟ್ಲ ಶಾಖಾ ಆಫೀಸ್ ಹಾಲಲ್ಲಿ ಜರುಗಿತು. ಬ್ರಾಂಚ್ ಉಸ್ತುವಾರಿ ನವಾಝ್ ಸಖಾಫಿ ಉಳ್ಳಾಲ ತರಗತಿ ನಡೆಸಿದರು.

ಬಳಿಕ ಪವಿತ್ರ ಉಮ್ರಾ ಯಾತ್ರೆಗೆ ಹೊರಡುವ  SYS ಪಟ್ಲ ಬ್ರಾಂಚಿನ ಅಧ್ಯಕ್ಷರು ಹಾಗೂ ದರ್ಗಾ ಸಮಿತಿ ಸದಸ್ಯರು ಆದ  ಮೊಯ್ದಿನಾಕ ಇವರಿಗೆ  ಎಸ್ ವೈ ಎಸ್ ಪಟ್ಲ ಬ್ರಾಂಚ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಎಸ್ಸೆಸ್ಸೆಫ್ ಪಟ್ಲ ಶಾಖೆ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಪ್ರಸ್ತುತ ತರಗತಿಯಲ್ಲಿ ಎಸ್ ವೈ ಎಸ್, ಎಸ್ಸೆಸ್ಸೆಫ್ ಸದಸ್ಯರು ಉಪಸ್ಥಿತರಿದ್ದರು.

Sunday, 1 March 2020

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವಾರ್ಷಿಕ ಕೌನ್ಸಿಲ್


ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವಾರ್ಷಿಕ ಕೌನ್ಸಿಲ್ ದಿನಾಂಕ 29/02/2020 ರಂದು ತಾಜುಲ್ ಉಲಮಾ ಸುನ್ನೀ ಸೆಂಟರ್ ಮೇಲಂಗಡಿಯಲ್ಲಿ ಸೆಕ್ಟರ್ ಅಧ್ಯಕ್ಷ ರಾದ ಶಬೀರ್ ಪೇಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. 


ಪ್ರಸ್ತುತ ಕಾರ್ಯಕ್ರಮದಲ್ಲಿ ಮುನೀರ್ ಅಹ್ಮದ್ ಖಾಮಿಲ್ ಸಖಾಫಿಯವರು ದುಆ ಮೂಲಕ ಚಾಲನೆ ನೀಡಿದರು ಡಿವಿಜನ್ ಅಧ್ಯಕ್ಷರಾದ  ಸೆಯ್ಯಿದ್ ಖುಭೈಬ್ ತಂಗಲ್ ರವರು ಉದ್ಘಾಟಿಸಿ ಮಾತನಾಡಿದರು "ಭಯ ಬಿಡಿ ಭರವಸೆ ಇಡಿ" ಎಂಬ ವಿಷಯದಲ್ಲಿ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ಉಸ್ತಾದ್ ತರಗತಿ ನಡೆಸಿಕೊಟ್ಟರು ನಂತರ ಕೋಶಾಧಿಕಾರಿ ಮುಝಮ್ಮಿಲ್ ಕೋಟೆಪುರರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು ನಂತರ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಮದನಿ ಕೋಟೆಪುರರವರು ವಾರ್ಷಿಕ ವರದಿ ವಾಚಿಸಿ ಸಭೆಯ ಅನುಮತಿಯೊಂದಿಗೆ ಅನುಮೋದಿಸಿದರು 

ನಂತರ ಸಭೆಯ ತೀರ್ಮಾನದಂತೆ ಪ್ರಸ್ತುತ ಸಮಿತಿಯನ್ನು ಬರ್ಖಾಸ್ತುಗೊಳಿಸಿ 2020-21ರ  ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು ನೂತನ ಸಮಿತಿಯ ಅಧ್ಯಕ್ಷರಾಗಿ ಹಂಝಾ ಸುಂದರಿಭಾಗ್  ಪ್ರಧಾನ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಮದನಿ ಕೋಟೆಪುರ ಕೋಶಾಧಿಕಾರಿಯಾಗಿ ಅತೀಕ್ ಕೋಡಿ ಉಪಾಧ್ಯಕ್ಷರಾಗಿ ಜಾಬಿರ್ ಉಸ್ತಾದ್ , ಹಾಫಿಲ್ ಮುಈನುದ್ದೀನ್ ರಝಾ ಅಲ್-ಅಮ್ಜದಿ ಅಝಾದ್ ನಗರ ಜೊತೆ ಕಾರ್ಯದರ್ಶಿಗಳಾಗಿ ತಶ್ರೀಫ್ ಮೇಲಂಗಡಿ ನಿಸಾರ್ ಸಖಾಫಿ ಮುಕ್ಕಚ್ಚೇರಿರವರು ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಿಹಾಂ ಮುಕ್ಕಚ್ಚೇರೀ ರೈನ್ ಬೋ  ಕನ್ವೀನರ್ ಆಗಿ  ಮುಹಾಝ್ ಮೇಲಂಗಡಿ.
ವಿಸ್ಡಂ ಕನ್ವೀನರ್ ಆಗಿ ಫೈಝಲ್ ಕೋಟೇಪುರ,ಮಹ್ಲರತುಲ್ ಬದ್ರಿಯ್ಯಾ ಮಜ್ಲಿಸ್ ಅಮೀರ್ ಆಗಿ ಸೈಫುಲ್ಲಾ ಸಖಾಫಿ ಮುಕಚ್ಚೇರಿರವರು  ,ಸಮಿತಿ ಸದಸ್ಯರುಗಳಾಗಿ ಸಯ್ಯಿದ್ ಖುಬೈಬ್ ತಂಙಳ್ ,ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ಶಬೀರ್ ಪೇಟೆ,ಮುಝಮ್ಮಿಲ್ ಕೋಟೇಪುರ,ಸಿರಾಜ್ ಅಕ್ಕರೆಕೆರೆ,ಇಮ್ರಾನ್ ಕೋಡಿ,ಶಿಹಾಬ್ ಪೇಟೆ.,ಶಫೀಕ್ ಹುಸೈನ್ ಮೇಲಂಗಡಿ,ನಿಝಾಮ್ ಒಂಭತ್ತುಕೆರೆ,ದಾವೂದ್ ಬೊಟ್ಟು,ರಿಲ್ವಾನ್ ಸುಂದರಿಬಾಗ್,ಹಮೀದ್ ಹಳೇಕೋಟೆ,ಹನೀಫ್ ಹಳೇಕೋಟೆ, ಸಲಾಂ ಹಳೇಕೋಟೆ ವೀಕ್ಷಕರಾಗಿ ಇಸ್ಮಾಯಿಲ್ ತಲಪಾಡಿ ಆಗಮಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ ಡಿವಿಜನ್ ಪ್ರಧಾನ ಕಾರ್ಯ ದರ್ಶಿ ಹಮೀದ್ ತಲಪಾಡಿ ಜೊತೆ ಕಾರ್ಯದರ್ಶಿ ಜಾಫರ್ ಯುಎಸ್ ಹಾಜರಿದ್ದರು ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಮದನಿ ಸ್ವಾಗತಿಸಿ ಧನ್ಯವಾದಗೈದರು.





Thursday, 27 February 2020

ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ವತಿಯಿಂದ ಅಧ್ಯಯನ ತರಗತಿ


ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ವತಿಯಿಂದ ಅಧ್ಯಯನ ತರಗತಿ ಹಾಫಿಝ್ ಆಶಿಖ್ ರವರ ಅಧ್ಯಕ್ಷತೆಯಲ್ಲಿ ಅಕ್ಕರೆಕೆರೆ ಶಾಖಾ ಕಛೇರಿಯಲ್ಲಿ ನಡೆಯಿತು. ಇರ್ಶಾದ್ ಹಿಮಮಿ ಉಸ್ತಾದ್ ತರಗತಿ ನಡೆಸಿದರು.
          ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ನಾಯಕರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಮಾರ್ಚ್ 08 ಆದಿತ್ಯವಾರ ಇಶಾ ನಮಾಜು ಬಳಿಕ ನಡೆಯುವ ಬ್ರಹತ್ ಅಜ್ಮೀರ್ ಮೌಲೂದ್ ಮಜ್ಲಿಸ್ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಅಕ್ಕರೆಕೆರೆ ನಾಯಕರು, ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಈ ಸಂದರ್ಭದಲ್ಲಿ ಕರೆಯಿತ್ತರು.




Sunday, 24 November 2019

ಜಪಾನ್ ನ ಕೈಝನ್ ಸಿಸ್ಟಮ್ ನಮ್ಮಲ್ಲೂ ಅಳವಡಿಸಿದರೆ......


🎓🎓 *ಮಾಸ್ಟರ್ ಮೈಂಡ್* 🎓🎓 

 ಜಪಾನ್ ನ ಕೈಝನ್ ಸಿಸ್ಟಮ್ ನಮ್ಮಲ್ಲೂ ಅಳವಡಿಸಿದರೆ......

 *Kaizen system* ಇದು ಜಪಾನ್ ನಲ್ಲಿ ವೈಯಕ್ತಿಕ ಬದುಕು ಮತ್ತು ವ್ಯಾವಹಾರಿಕ ರಂಗಗಳಲ್ಲಿ ಅಳವಡಿಸುತ್ತಾ ಬಂದಿರುವ ಒಂದು ಸಿಸ್ಟಮ್.

ಏನಾಗಿದೆ Kaizen System? 
       A Japanese business philosophy of *continuous small improvement or development* of working practices, personal efficiency, etc.
Plan - Do - Check - Act

 *ನಿಧಾನ*(Slow) ಮತ್ತು *ನಿರಂತರ*(Continue) ಈ ಎರಡು ವಿಚಾರಗಳು ವೈಯಕ್ತಿಕ, ವ್ಯಾವಹಾರಿಕ ಮತ್ತು ಸಾಂಘಿಕ ರಂಗಗಳಲ್ಲಿ ಉದ್ದೇಶಿತ ಗುರಿ (Goal)ತಲುಪಲು ಸಹಕರಿಸುವ ಎರಡು ಮಾಧ್ಯಮಗಳಾಗಿವೆ.
ಇದಾಗಿದೆ ಜಪಾನ್ ಅಳವಡಿಸುತ್ತಾ ಬಂದ ಕೈಝನ್ ಸಿಸ್ಟಮ್, ಇದರಿಂದಾಗಿಯೇ ಜಪಾನ್ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರದ ಪಟ್ಟಿಯಲ್ಲಿ ಕಾಣಲು ಸಾಧ್ಯವಾದದ್ದು.

ಅಲ್ಲಾಹನು ಲೈಕ್ ಮಾಡುವದೂ ಅದನ್ನೇ
 أَحَبَّ الأَعْمَالِ أَدْوَمُهَا إِلَى اللَّهِ، وَإِنْ قَلَّ ‏"‏
(ಅಲ್ಲಾಹನು ಇಷ್ಟಪಡುವ ಇಬಾದತ್ ನಿರಂತರವಾಗಿ ಮಾಡುವುದಾಗಿದೆ ಅದು ಕಡಿಮೆಯಾಗಿದ್ದರೂ ಸರಿ)

ಅಂತೂ ನಮ್ಮೆಡೆಯಲ್ಲಿ ಈ ವಿಚಾರ ಚರ್ಚೆಗಿಟ್ಟರೆ ಸಿಗುವ ಉತ್ತರ ಹೇಗಿರಬಹುದು.
ವೈಯಕ್ತಿಕ,ವ್ಯಾವಹಾರಿಕ ಮತ್ತು ಸಾಂಘಿಕ ರಂಗಗಳಲ್ಲಿ ನಮಗಿರುವ *ವಿಶನ್* ಮತ್ತು ಆ ಗುರಿ ತಲುಪಲು ನಾವು ಮಾಡಿದ *ಮಿಷನ್ಸ್* ಏನಾಗಿದೆ ?
ಅದೂ ಅಲ್ಲದೆ ನಿಧಾನ ಮತ್ತು ನಿರಂತರ ಎಂಬ ವಿಚಾರ ನಮ್ಮಲ್ಲಿವೆಯೇ ?
Plan - Do - check - Act ನಮ್ಮಲ್ಲಿ ಉಂಟಾ ?
(Check =ಅವಲೇೂಕನ
Act = Action - Reward or Punishment) 
ಇದೆಲ್ಲದಕ್ಕೂ Yes ಎಂಬ ಉತ್ತರ ನಮ್ಮದಾಗಿದ್ದರೆ Success ಕಟ್ಟಿಟ್ಟ ಬುತ್ತಿ ಮತ್ತು ಅಭಿವೃದ್ಧಿ ಹೊಂದಿದ ಪಟ್ಟಿಯಲ್ಲಿ ಸೇರಬಹುದು.

ಅಂದ ಹಾಗೆ ಸೆರ್ಕ್ಯುಲರ್ ನ ವಿಚಾರದಲ್ಲಿ ನಮ್ಮ ಸಾಂಘಿಕ ನಾಯಕ *ಕೆ.ಎಂ* ರವರ ತರಗತಿಯಲ್ಲಿ ಹೀಗೆ ಕೇಳಿದ್ದೆ....
"ಆಲಸ್ಯತನ (Laziness) ಎರಡು ರೂಪದಲ್ಲಿದೆ.
ಒಂದು - ಸೆರ್ಕ್ಯುಲರ್ ನಲ್ಲಿರುವ ಕಾರ್ಯಕ್ರಮ ಮಾಡದಿರುವುದು.
ಎರಡು - ಸೆರ್ಕ್ಯುಲರ್ ನಲ್ಲಿರುವುದನ್ನು ಮಾತ್ರ ಮಾಡಿ ಸುಮ್ಮನಿರುವುದು ಇತರ ಯಾವುದೇ ಹೊಸ ಕಾರ್ಯಕ್ರಮ ಮಾಡದಿರುವುದು.
ಕೆಲವು ಘಟಕಗಳಲ್ಲಿ ಸೆರ್ಕ್ಯುಲರ್ ಬರುವುದನ್ನೇ ಕಾಯುವ ಪರಿಪಾಟ ಈಗಲೂ ಇದ್ದರೆ ಅದನ್ನು ತಿದ್ದುವುದು ಒಳಿತು.
ತಮ್ಮ ಘಟಕದ ವ್ಯಾಪ್ತಿಯಲ್ಲಿ ಸಂಘಟಣೆ ಮತ್ತು ಕಾರ್ಯಕರ್ತರ ಬೆಳವಣಿಗೆಗೆ ಅಗತ್ಯವಾದ ಕಾರ್ಯಯೇೂಜನೆ ಮಾಡುವುದರೊಂದಿಗೆ ಸೆರ್ಕ್ಯುಲರನ್ನೂ ಫಾಲೇೂ ಮಾಡುವವರು ನಾವಾಗೇೂಣ.

     📱 7760053572
✍ *Musthafa Master Ullal*
*======================*

Tuesday, 3 September 2019

ಮಹ್ಳರತುಲ್ ಬದ್ರಿಯ್ಯ ಮಜ್ಲಿಸ್ ಗೆ ಒಂದು ಅಪ್ಡೇಟ್


🎓🎓 ಮಾಸ್ಟರ್ ಮೈಂಡ್ 🎓🎓

 ಮಹ್ಳರತುಲ್ ಬದ್ರಿಯ್ಯ ಮಜ್ಲಿಸ್ ಗೆ ಒಂದು ಅಪ್ಡೇಟ್

   Honorable Grand Mufthi of India ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ರವರು ಸುನ್ನೀ ಸಂಘ ಕುಟುಂಬದ ಎಲ್ಲಾ ಘಟಕಗಳಿಗೂ ಮಾಸಂಪ್ರತಿ ಅದರ ಕಾರ್ಯಕರ್ತರನ್ನು ಸೇರಿಸಿ ಹೇಳಲು ಪ್ರತ್ಯೇಕ ಇಜಾಝತ್ ಕೊಟ್ಟ ದ್ಸಿಕ್ರ್ ಗಳ ಕ್ರೇೂಢೀಕರಣವಾಗಿದೆ ಮಹ್ಳರತುಲ್ ಬದ್ರಿಯ್ಯ.

    ಒಂದರ್ಥದಲ್ಲಿ ಇದು ಘಟಕಕ್ಕೆ ಸಿಗುವ ಆತ್ಮೀಯ ಅಂಗೀಕಾರ ಪತ್ರ ಎಂದರೂ ತಪ್ಪಲ್ಲ.

      ಕಳೆದ ಎರಡ್ಮೂರು ವರ್ಷಗಳಲ್ಲಿ ಹಲವು ಘಟಕಗಳಲ್ಲಿ ನಡೆಸಿಕೊಂಡು ಬರುವ ಈ ಮಜ್ಲಿಸ್ ಗೆ ಕೆಲವೊಂದು ಹೊಸತನ ಸೇರ್ಪಡೆಗೊಳಿಸುವುದು ಅವಶ್ಯಕ.

        ಶಾಖೆಗಳಲ್ಲಿ ಮಾಸಂಪ್ರತಿ ಮಾಡುವ ಮಜ್ಲಿಸ್ ಯುನಿಟ್ ಕಛೇರಿಯಲ್ಲಿ ಮಾಡುವುದನ್ನು ಬಿಟ್ಟು ಶಾಖಾ ವ್ಯಾಪ್ತಿಯ ಸೌಕರ್ಯವಾಗುವ ಮನೆಗಳಲ್ಲಿ ಮಾಡುವುದು ಉತ್ತಮ.
ಕೊನೆಯ ದುಆದ ಮುಂಚೆ ಮಾಡುವ 15 ನಿಮಿಷಗಳ ತರಗತಿಯಲ್ಲಿ ನಮ್ಮ ಸಂಘಟನೆಯ ಮಹತ್ವವನ್ನೂ ಸೇರಿಸಿ ಹೇಳಬಹುದು. ಇದೆಲ್ಲವೂ ಸೈಲೆಂಟಾಗಿ ದಅ್ ವಾ ಮಾಡುವುದಲ್ಲದೆ ನಿಧಾನವಾಗಿ ಹೊಸ ಮುಖಗಳು ಸಂಘಟನೆಗೆ ಆಕರ್ಷಿಸುವಂತೆ ಮಾಡುತ್ತದೆ.

       ಇನ್ನೊಂದು ವಿಚಾರ, ಘಟಕಗಳಲ್ಲಿ ಮಜ್ಲಿಸ್ ನಡೆಸುವುದರೊಂದಿಗೆ ಪ್ರತಿಯೊಬ್ಬ ಕಾರ್ಯಕರ್ತ ತನ್ನ ಮನೆಯಲ್ಲಿಯೂ ಮಾಸಂಪ್ರತಿ ಪರಿಸರದ 10-15 ರಷ್ಟು ಹೊಸಮುಖ (ವಿದ್ಯಾರ್ಥಿ) ಗಳನ್ನು ಸೇರಿಸಿ ಮಜ್ಲಿಸ್ ಸಂಘಟಿಸುವುದೂ ಹೊಸಬರನ್ನು ಸಂಘಟನೆಯತ್ತ ಕೊಂಡು ತರುತ್ತದೆ ಅಲ್ಲದೆ ಒಂದು ವರ್ಷದಲ್ಲಿ ಸಾಂಘಿಕ ಅರಿವು ಇರುವ ಟೀಂ ಕೂಡಾ ರೆಡಿ ಮಾಡಬಹುದು.

✍ *Musthafa Master Ullal*
*======================*