Share To

Tuesday, 7 November 2017

ವಿದೇಶ ಯಾತ್ರೆ ಹೊರಟ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್ ಇವರಿಗೆ ಬೀಳ್ಕೊಡುಗೆ

ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ವತಿಯಿಂದ ವಿದೇಶ ಯಾತ್ರೆ ಹೊರಟ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್ ಇವರಿಗೆ ಎಸ್ಸೆಸ್ಸೆಫ್ ಎಸ್ ವೈ ಎಸ್ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಮಾತನಾಡಿ ಇತ್ತೀಚೆಗೆ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಸಹ ಕಾರ್ಯಕರ್ತರೊಂದಿಗೆ ಸೇರಿ ತನ್ನ ಸಕ್ರಿಯತೆಯ ಮೂಲಕ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯಲ್ಲಿ ಸಂಚಲನ ಮೂಡಿಸುತ್ತಿದ್ದ ಜಿಶಾನ್ ವಿದೇಶ ಯಾತ್ರೆ ಹೊರಡುತ್ತಿದ್ದು ಅವರ ಕಾರ್ಯ ವೈಖರಿಯನ್ನು ಪ್ರಶಂಶಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಉಪಾಧ್ಯಕ್ಷರಾದ ಖಾಲಿದ್ ಪಟೇಲ್ ಕಂಪೌಂಡ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಮಾಜಿ ಕೋಶಾಧಿಕಾರಿ ಅಬ್ದುಲ್ ಮಜೀದ್, ಹಾಲಿ ಕೋಶಾಧಿಕಾರಿ ಸಿರಾಜ್, ಮುಝಯ್ಯಿನ್ ಹಾಗು ಫಾಝಿಲ್ ಉಪಸ್ಥಿತರಿದ್ದರು.

Monday, 6 November 2017

ಅಕ್ಕರೆಕೆರೆ : ಅಹ್ಲುಸ್ಸುನ್ನಃ ಸಂದೇಶ ಹಾಗು ಇಶಾರ ಅಭಿಯಾನ

ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ ಎಸ್ ಎಫ್)  ಉಳ್ಳಾಲ ಅಕ್ಕರೆಕೆರೆ ಶಾಖೆಯ ವತಿಯಿಂದ  ರಾಜ್ಯ ಸಮಿತಿಯ ನಿರ್ದೇಶನದಂತೆ ನಾಲ್ಕನೇ ವಾರದ ತರಗತಿಯಾದ "ಅಹ್ಲುಸ್ಸುನ್ನಃ ಸಂದೇಶ" ಎಂಬ ವಿಷಯದ ಕುರಿತು ಕಾರ್ಯಕರ್ತರಿಗೆ ವಿಶೇಷ ತರಗತಿಯು ದಿನಾಂಕ 5/11/17 ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕ ಅಕ್ಕರೆಕೆರೆಯ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು.   
ಎಸ್ಸೆಸ್ಸೆಫ್ ಕೋಟೆಪುರ ಶಾಖಾಧ್ಯಕ್ಷರಾದ ಮುಝಮ್ಮಿಲ್ ಉಸ್ತಾದ್ ತರಗತಿ ನಡೆಸಿಕೊಟ್ಟರು. ಬಳಿಕ ಇಶಾರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.