Share To

Sunday, 30 December 2018

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಹಾಗು ನೂತನ ಪದಾಧಿಕಾರಿಗಳ ಆಯ್ಕೆ


ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧೀನದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ವಾರ್ಷಿಕ ಕೌನ್ಸಿಲ್ 29-12-2018 ￵ಶನಿವಾರ ಮಗ್ರಿಬ್ ನಮಾಝಿನ ಬಳಿಕ ತಾಜುಲ್ ಉಲಮಾ ಸುನ್ನೀ ಸೆಂಟರ್, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ಕಛೇರಿಯಲ್ಲಿ ಸೆಕ್ಟರ್ ಅಧ್ಯಕ್ಷ  ಮುಸ್ತಫ  ಮಾಸ್ಟರ್ ಮುಕ್ಕಚೇರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹಮದ್ ಕಾಮಿಲ್ ಸಖಾಫಿ ಯವರು ಇತ್ತೀಚೆಗೆ ಮರಣ ಹೊಂದಿದ ಅಶ್ರಫ್ ಅಡ್ಡೂರು, ತೋಕೆ ಉಸ್ತಾದರ ತಾಯಿ ಹಾಗೂ ಎಲ್ಲಾ ಸುನ್ನೀ ಕಾರ್ಯಕರ್ತರ ಮೇಲೆ ತಹ್ಲೀಲ್ ನೆರವೇರಿಸಿ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಪ್ರದಾನ ಕಾರ್ಯದರ್ಶಿ ಹಂಝಾ ಸುಂದರಿ ಬಾಗ್ ಸ್ವಾಗತಿಸಿರು. ಪ್ರಸ್ತುತ ಕೌನ್ಸಿಲ್ಗೆ  ರಾಜ್ಯ ಎಸ್ಸೆಸ್ಸೆಫ್ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ದ.ಕ ಜಿಲ್ಲಾ ಎಸ್ಸೆಸ್ಸೆಫ್ ನಾಯಕರಾದ ಸೆಯ್ಯಿದ್ ಖುಬೈಬ್ ತಂಙಳ್,ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಸಖಾಫಿ, ಡಿವಿಷನ್ ಎಲೆಕ್ಷನ್ ಆಫೀಸರ್ ಹಮೀದ್ ತಲಪಾಡಿ ,ಇಲ್ಯಾಸ್ ಪಟ್ಟೊಳಿಕೆ & ಜಾಫರ್ ಅಲೇಕಲ ಸಭೆಯನ್ನು ನಿಯಂತ್ರಿಸಿದರು.
ಸಭೆಯಲ್ಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಶಬೀರ್ ಪೇಟೆ ಉಪಾಧ್ಯಕ್ಷರುಗಳಾಗಿ ಹಂಝ ಸುಂದರಿಬಾಗ್,ಜಾಬಿರ್ ಫಾಲಿಳಿ ,ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬಾಸ್ ಮಝಮ್ಮಿಲ್ ಮದನಿ ಕೋಟೆಪುರ,ಜೊತೆ ಕಾರ್ಯದರ್ಶಿಯಾಗಿ  ಸಿರಾಜ್ ಅಕ್ಕರೆಕೆರೆ, ತಶ್ರೀಫ್ ಮೇಲಂಗಡಿ, ಕೋಶಾಧಿಕಾರಿಯಾಗಿ ಮುಝಮ್ಮಿಲ್ ಕೋಟೆಪುರ,ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಾಝ್ ಮೇಲಂಗಡಿ,ಎಸ್ ಬಿ ಎಸ್ ಕನ್ವೀನರ್ ಮುಹಮ್ಮದ್ ಹಾಶೀರ್ ಕೋಡಿ ರವರನ್ನು ಒಳಗೊಂಡ 44 ಕಾರ್ಯಕಾರಿ ಸಮಿತಿಗಳನ್ನು ಆಯ್ಕೆಮಾಡಲಾಯಿತು.ಕೊನೆಗೆ ನೂತನ ಕಾರ್ಯದರ್ಶಿ ಮಝಮ್ಮಿಲ್ ಮದನಿ ವಂದಿಸಿದರು.

ಎಸ್ ವೈ ಎಸ್ ಎಸ್ಸೆಸ್ಸೆಫ್ ಮೇಲಂಗಡಿ ಕಾರ್ಯಕ್ರಮಕ್ಕೆ ಚಾಲನೆ

ಎಸ್ ವೈ ಎಸ್ & ಎಸ್ಸೆಸ್ಸೆಫ್ ಮೇಲಂಗಡಿ ಉಳ್ಳಾಲ ಇದರ ವಿಜೃಂಭಣೆಯ 12 ದಿವಸಗಳ ಕಾರ್ಯಕ್ರಮಕ್ಕೆ ಸೆಯ್ಯದ್ ಮುಹಮ್ಮದ್‌ ಶರೀಫುಲ್ ಮದನಿ ದರ್ಗಾ ಝಿಯಾರತಿನೊಂದಿಗೆ ಮತ್ತು ಪತಾಕೆ ಹಾರಿಸುವುದರೊಂದಿಗೆ ಅಬೂ ಝಿಯಾದ್ ಪಟ್ಟಾಂಬಿ ಉಸ್ತಾದರು‌ ಚಾಲನೆ ನೀಡಿದರು

Sunday, 4 November 2018

ಎಸ್ಸೆಸ್ಸೆಫ್ ಅಕ್ಕರೆಕೆರೆ ಯೂನಿಟ್ ಸಮ್ಮೇಳನ ಹಾಗು ಸದಸ್ಯತನ ಅಭಿಯಾನ


ಎಸ್ಸೆಸ್ಸೆಫ್ ಅಕ್ಕರೆಕೆರೆ ಯೂನಿಟ್ ಸಮ್ಮೇಳನ

ಉಳ್ಳಾಲ ಅಕ್ಕರೆಕೆರೆ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯಾದ್ಯಂತ ಯೂನಿಟ್ ಸಮ್ಮೇಳನಗಳು ಹಾಗು ಸದಸ್ಯತನ ಅಭಿಯಾನ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ವತಿಯಿಂದ ಯೌವ್ವನ ಮರೆಯಾಗುವ ಮುನ್ನ ಎಂಬ ಶೀರ್ಷಿಕೆಯಡಿ ಯುನಿಟ್ ಸಮ್ಮೇಳನ ಹಾಗು ಸದಸ್ಯತನ ಅಭಿಯಾನ ನಡೆಯಿತು.
ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ನಿರ್ದೇಶಕರಾದ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಫಿಝ್ ಉವೈಸ್ ಕೋಟೆಪುರ ಮುಖ್ಯ ಪ್ರಭಾಷಣ ನಡೆಸಿದರು. ದ.ಕ ಜಿಲ್ಲಾ ನಾಯಕ ಸಯ್ಯಿದ್ ಖುಬೈಬ್ ತಂಗಲ್ ಹಾಗು ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಮುಸ್ತಫ ಮಾಸ್ಟರ್ ಎಸ್ಸೆಸ್ಸೆಫ್ ಸದಸ್ಯತನ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಪ್ರಥಮ ಸದಸ್ಯತನವನ್ನು ದ.ಕ ಜಿಲ್ಲಾ ನಾಯಕರಾದ ಅಲ್ ಹಾಜ್ ಸಯ್ಯಿದ್ ಖುಬೈಬ್ ತಂಗಲ್ ಪಡೆದರು.
ಈ ಸಂದರ್ಭದಲ್ಲಿ ಸೆಕ್ಟರ್ ಜತೆ ಕಾರ್ಯದರ್ಶಿ ಮುಝಮ್ಮಿಲ್ ಮದನಿ, ಆಝಾದ್ ನಗರ ಶಾಖಾಧ್ಯಕ್ಷ ಹಾಫಿಝ್ ಮುಈನ್ ರಝಾ ಅಲ್ ಅಮ್ಜದಿ, ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್, ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ನಾಯಕ ಅಲ್ ಹಾಜ್ ಅಬ್ದುಲ್ಲತೀಫ್ ಉಪಸ್ಥಿತರಿದ್ದರು. ಶಾಖಾ ನಾಯಕ ಸಿರಾಜುದ್ದೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.