Friday, 31 March 2017
ಉಳ್ಳಾಲಬೈಲು ಬೊಟ್ಟು : ಮೆಸೇಜ್ ಆಫ್ ರಜಬ್ ಸಂಗಮ
Thursday, 30 March 2017
ಆಝಾದ್ ನಗರ : ರಜಬ್ ಸಂದೇಶ ಉದ್ಘಾಟನಾ ಸಮಾರಂಭ ಹಾಗು ರಿಯಾಝ್ ಉಸ್ತಾದ್ ಮೇಲೆ ತಹ್ಲೀಲ್ ಸಮರ್ಪಣೆ
Wednesday, 29 March 2017
ಉಳ್ಳಾಲಬೈಲು ಬೊಟ್ಟು : ಬೀಳ್ಕೊಡುಗೆ ಸಮಾರಂಭ
ಪವಿತ್ರ ಉಮ್ರಃ ಝಿಯಾರತ್ ಬಯಸಿ ಯಾತ್ರೆ ಹೊರಟ ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ಶಾಖೆ ಇದರ ಜೊತೆ ಕಾರ್ಯದರ್ಶಿ ಸಾಹಿಲ್ ಇವರಿಗೆ ಬೀಳ್ಕೊಡುಗೆ ಸಮಾರಂಭ ಶಾಖಾಧ್ಯಕ್ಷ ಇಸ್ಮಾಯಿಲ್ ಯು.ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ದುವಾ ನೆರವೇರಿಸಿ ಸಾಹಿಲ್ ಇವರಿಗೆ ಶುಭ ಹಾರೈಸಿದರು.ಈ ಸಂರ್ಭದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಹಾಗು ಉಳ್ಳಾಲಬೈಲು ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಸ್ವಾಗತಿಸಿ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಯು.ಬಿ ಧನ್ಯವಾದಗೈದರು
Tuesday, 28 March 2017
ಹಳೆಕೋಟೆ : ರಿಯಾಝ್ ಉಸ್ತಾದ್ ರವರ ಮೇಲೆ ತಹ್ಲೀಲ್ ಮಜ್ಲೀಸ್ ಮತ್ತು ರಜಬ್ ಸಂದೇಶ ತರಗತಿ
ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ವತಿಯಿಂದ ಮರ್ಹೂಂ ರಿಯಾಝ್ ಉಸ್ತಾದ್ ರವರ ಮೇಲೆ ತಹ್ಲೀಲ್ ಮಜ್ಲೀಸ್ ಮತ್ತು ರಜಬ್ ಸಂದೇಶ ತರಗತಿ ಶಾಖಾ ಉಪಾಧ್ಯಕ್ಷ ತೌಸೀಫ್ ಎಸ್ ಬಿ ಇವರ ಅಧ್ಯಕ್ಷತೆಯಲ್ಲಿ ಹಳೆಕೋಟೆಯ ಎಸ್ಸೆಸ್ಸೆಫ್ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು.
ಹಳೆಕೋಟೆ ಶಾಖಾ ಉಸ್ತುವಾರಿ ತಶ್ರೀಫ್ ಮೇಲಂಗಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಹಳೆಕೋಟೆ ತಹ್ಲೀಲ್ ಸಂಗಮದಲ್ಲಿ ನೇತ್ರತ್ವ ವಹಿಸಿ ದುವಾ ನೆರವೇರಿಸಿದರು. ಸುನ್ನೀವಾಣಿ ಸಂಪಾದಕ ಯೂನುಸ್ ಇಮ್ದಾದಿ ರಜಬ್ ಸಂದೇಶ ತರಗತಿಗೆ ಚಾಲನೆ ನೀಡಿದರು.
ಶಾಖಾ ಉಪಾಧ್ಯಕ್ಷರುಗಳಾದ ಹಮೀದ್ ಮತ್ತು ತೌಸೀಫ್, ಜೊತೆ ಕಾರ್ಯದರ್ಶಿಗಳಾದ ಹಕೀಮ್ ಮತ್ತು ಇಬ್ರಾಹೀಂ, ಬಾಶಿತ್, ಫಾರೀಷ್, ಶಾಹಿದ್, ಸಂಶೀರ್,ಹಫೀಲ್, ಅಕೀಲ್ , ಇಜಾಝ್,ಬಾರಿಝ್, ಶಕೀಲ್ ಹಾಗು ಇತರರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸುಂದರಭಾಗ್ : ಸಮಿತಿ ಸಭೆ
ಎಸ್ಸೆಸ್ಸೆಫ್ ಸುಂದರಭಾಗ್ ಶಾಖಾ ಸಮಿತಿ ಸಭೆ ಶಾಖಾಧ್ಯಕ್ಷ ಸಯೀದ್ ಅಬೂಬಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಂಝ ಯು.ಬಿ ದುವಾ ನೆರವೇರಿಸಿದರು. ಸಭಾಧ್ಯಕ್ಷರು ಉದ್ಘಾಟಿಸಿದರು. ಶಾಖಾ ಪ್ರಧಾನ ಕಾರ್ಯದರ್ಶಿ ಸಯೀದ್ ಅಫ್ರಿದಿ ಸ್ವಾಗತಿಸಿ ಸೈಫುಲ್ಲಾಹ್ ಧನ್ಯವಾದಗೈದರು. ಎಲ್ಲಾ ಸಮಿತಿ ಸದಸ್ಯರು ಭಾಗವಹಿಸಿದ್ದರು


