ಎಸ್ಸೆಸ್ಸೆಫ್ ಎಸ್ ವೈ ಎಸ್ ಉಳ್ಳಾಲ ಮೇಲಂಗಡಿ ಆಶ್ರಯದಲ್ಲಿ ಯೂಸುಫ್ ಹಾಜಿ ಮಿಲ್ಲತ್ ನಗರ ರವರ ನಿವಾಸದಲ್ಲಿ ತಾಜುಲ್ ಉಲಮಾ ಮೌಲಿದ್ ಮಜ್ಲಿಸ್, ತಹ್ಲೀಲ್ ಮಜ್ಲಿಸ್ ಮತ್ತು ಪ್ರಾರ್ಥನಾ ಸಂಗಮ ಅಬೂ ಅನಸ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ ವೈ ಎಸ್ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಶರೀಫ್ ಸಅದಿ ನಮ್ಮಿಂದ ಅಗಲಿದ ತೇಜಸ್ಸು ವೈಲತ್ತೂರು ತಂಗಳ್ ಕುರಿತು ಮಾತನಾಡಿದರು, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷ ಬಶೀರ್ ಸಖಾಫಿ ಉಳ್ಳಾಲ,ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್ ಉಪಸ್ಥಿತರಿದ್ದರು.
Sunday, 22 January 2017
ಎಸ್ಸೆಸ್ಸೆಫ್ ಎಸ್ ವೈ ಎಸ್ ಮೇಲಂಗಡಿ : ತಾಜುಲ್ ಉಲಮಾ ಮೌಲಿದ್, ತಹ್ಲೀಲ್ ಮಜ್ಲಿಸ್
Saturday, 21 January 2017
ಸಯ್ಯಿದ್ ವೈಲತ್ತೂರು ತಂಗಳ್ ವಫಾತಿಗೆ ಸಂತಾಪ
ಕೇರಳ"ಮಲಪ್ಪುರಂ ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷರೂ ಮರ್ಕಝ್ ಉಪಾಧ್ಯಕ್ಷರೂ ಪವಿತ್ರ ಕಾಬಾ ಶುದ್ದೀಕರಣ ಕಾರ್ಯಕ್ರಮದಲ್ಲೂ ಭಾಗವಹಿಸಿದ ಪ್ರಮುಖ ಸುನ್ನೀ ನಾಯಕ ಆಧ್ಯಾತ್ಮಿಕ ನೇತಾರ ಸಯ್ಯಿದ್ ಯೂಸುಫುಲ್ ಜೀಲಾನೀ ರವರ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಗೌಸುಲ್ ಅಹ್ಳಮ್ ಅಶ್ಶೈಖ್ ಮುಹ್ಯುದ್ದೀನ್ ಶೈಖ್(ಖ.ಸಿ.) ರವರ ಪರಂಪರೆಗೆ ಸೇರಿದ ಕರವತ್ತಿ ಧ್ವೀಪದಲ್ಲಿ ಅಂತ್ಯ ವಿಶ್ರಮ ಹೊಂದಿರುವ ಅಸ್ಸಯ್ಯಿದ್ ಖಾಸಿಮ್ ವಲಿಯುಲ್ಲಾಹಿ (ಖ.ಸಿ.)ರವರ ಐದನೇ ಪೌತ್ರರಾದ ಯೂಸುಫುಲ್ ಜೀಲಾನಿ ಯವರ ವಿಯೋಗವು ಸುನ್ನಿಗಳಿಗೆ ತುಂಬಲಾಗದ ನಷ್ಟವಾಗಿದೆ. ಇವರ ವಿಯೂಗಕ್ಕೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ, ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಬೂ ಅನಸ್ ಜಮಾಲ್ ಉಸ್ತಾದ್, ನವಾಝ್ ಸಖಾಫಿ ಉಳ್ಳಾಲ ಸೇರಿದಂತೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮತ್ತು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಹಾಗು ಅದರ ಅಧೀನ ಬ್ರಾಂಚುಗಳ ಹಾಗು ಶಾಖೆಗಳ ನಾಯಕರು ಸಂತಾಪ ಸೂಚಿಸಿದ್ದಾರೆ.
Wednesday, 18 January 2017
SSF SYS ಮೇಲಂಗಡಿ ಮಹಬ್ಬತೇ ಜೀಲಾನೀ ನಸೀಹತ್ ಸಿಲ್ ಸಿಲಾ ಸಮಾರಂಭಕ್ಕೆ ಸಂಭ್ರಮದ ತೆರೆ. ಮೇಲಂಗಡಿಯಲ್ಲಿ ನವ ಇತಿಹಾಸ ಸ್ರಷ್ಟಿಸಿದ ಕಾರ್ಯಕ್ರಮ.
ಉಳ್ಳಾಲ ಮೇಲಂಗಡಿ : ಎಸ್ಸೆಸ್ಸೆಫ್ ಎಸ್ ವೈ ಎಸ್ ಮೇಲಂಗಡಿ ಹಮ್ಮಿಕೋಂಡ 8 ದಿವಸಗಳ ಮಹಬ್ಬತೇ ಜೀಲಾನಿ ನಸೀಹತ್ ಸಿಲ್ ಸಿಲಾ, ಬುರ್ದಾ ಮಜ್ಲಿಸ್,ಮದನಿ ಮಾಲೆ ಆಲಾಪನೆ, ಮುಹ್ಯಿದ್ದೀನ್ ಮಾಲೆ ಆಲಾಪನೆ, ತಾಜುಲ್ ಉಲಮಾ ಖ.ಸಿ ಮೌಲಿದ್ ಮಜ್ಲಿಸ್ ಉಳ್ಳಾಲ ದರ್ಗಾ ಮೈನ್ ರೋಡ್ ಬಳಿಯ ಝಬೈರ್ ಉಸ್ತಾದ್ ನಗರದ ಮರ್ಹೂಂ ಹಿದಾಯತ್ ಸಭಾಂಗಣದಲ್ಲಿ ಸಯ್ಯಿದ್ ತಾಜುಲ್ ಉಲಮಾ ವೇದಿಕೆಯಲ್ಲಿ ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಅಬೂ ಅನಸ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ಕೂರತ್ ರವರ ದುವಾಶೀರ್ವದೊಂದಿಗೆ ನಡೆಯಿತು.
ಸಯ್ಯಿದ್ ಜಲಾಲುದ್ದೀನ್ ತಂಗಳ್ ಅಲ್ ಬುಖಾರಿ ಮಳ್ಹರ್, ಸಯ್ಯಿದ್ ಸಿ.ಟಿ.ಎಂ ಸಲೀಂ ತಂಗಳ್, ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದ್, ಅನಸ್ ಸಖಾಫಿ ಶಿರಿಯಾ, ನೌಫಲ್ ಸಖಾಫಿ ಕಳಸ, ಹಾಫಿಝ್ ಸ್ವಾದಿಖ್ ಅಲ್ ಫಾಳಿಲಿ ಗೂಡಲ್ಲೂರು, ಸಯ್ಯಿದ್ ಶಹೀರ್ ತಂಗಳ್ ಅಲ್ ಬುಖಾರಿ, ಹಂಝ ಮದನಿ ಗುರುವಾಯನಕೆರೆ, ಯಾಕೂಬ್ ಮದನಿ, ಜಾಬಿರ್ ಅಲ್ ಫಾಳಿಲೀ ತಂಡ, ಅನ್ವರ್ ಅಲಿ ಶಿರಿಯಾ, ಶುಕೂರ್ ಇರ್ಫಾನಿ, ಸಯ್ಯಿದ್ ಜಲಾಲ್ ತಂಗಳ್ ಅಳೇಕಲ, ಅಫ್ಝಲ್ ಕಣ್ಣೂರ್, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಸಯ್ಯದ್ ಖುಬೈಬ್ ತಂಗಳ್, ಇಸ್ಮಾಯಿಲ್ ಮಾಸ್ಟರ್, ಬಶೀರ್ ಅಹ್ಸನಿ ತೋಡಾರ್, ಶರೀಫ್ ಸಅದಿ, ಬಶೀರ್ ಸಖಾಫಿ ಉಳ್ಳಾಲ ಮುಂತಾದ ಪ್ರಗಲ್ಭ ವಿದ್ವಾಂಸರು, ಸಾದಾತುಗಳು ಕಾರ್ಯಕ್ರಮಕ್ಕೆ ನೇತ್ರತ್ವ ನೀಡಿದರು.
ಕರೀಂ ಹಾಜಿ ಮೇಲಂಗಡಿ, ಸಚಿವ ಯು.ಟಿ ಖಾದರ್,ಹನೀಫ್ ಹಾಜಿ ಆಝಾದ್ ನಗರ, ತ್ವಾಹಿರ್ ಹಾಜಿ ಮುಕ್ಕಚ್ಚೇರಿ, ಇಸಾಕ್ ರಹ್ಮಾನಿಯ, ಯೂಸುಫ್ ಹಾಜಿ ಮಿಲ್ಲತ್ ನಗರ, ಬಿಲಾಲ್ ಮುಹಮ್ಮದ್ ಹಾಜಿ, ಇಸ್ಮಾಯಿಲ್ ಮುಕ್ಕಚ್ಚೇರಿ, ಸೀದಿಯಬ್ಬ ಸುಂದರಬಾಗ್, ಮುಹಮ್ಮದ್ ಮದನಿ ಹಳೆಕೋಟೆ, ನವಾಝ್ ಸಖಾಫಿ ಉಳ್ಳಾಲ, ಅಲ್ತಾಫ್ ಕುಂಪಲ, ಮುಸ್ತಫ ಮಾಸ್ಟರ್, ಬುಖಾರಿ ಕಲ್ಲಾಪು, ಫಾರೂಖ್ ಹಿಬಃ, ಇಲ್ಯಾಸ್ ಸಖಾಫಿ, ಜಾಫರ್ ಅಳೇಕಲ ಮುಝಮ್ಮಿಲ್ ಕೋಟೆಪುರ ಉಪಸ್ಥಿತರಿದ್ದರು.ಎಸ್ ವೈ ಎಸ್ ಬ್ರಾಂಚ್ ನಾಯಕರಾದ ಖಾದರ್ ಯು.ಟಿ, ಸತ್ತಾರ್, ಅಕ್ಬರ್, ಹಮೀದ್ ಹಾಗು ಶಾಖಾ ನಾಯಕರಾದ ಇಮ್ರಾನ್, ಝಿಯಾದ್, ತಶ್ರೀಫ್, ತಾಜುದ್ದೀನ್, ಅಶ್ಫಾಕ್, ಮೆಹರಲಿ, ನವಾಝ್, ಹುಸೈನ್ ನಿಝಾಂ, ಬಾಶಿತ್ ಹಾಗು ಸಫ್ವಾನ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.ಮುಝಮ್ಮಿಲ್ ಮೇಲಂಗಡಿ, ಮುಹಾಝ್, ಆಸಿಂ, ತಂಶೀರ್, ಮುಸ್ತಫ ಹಾಗು ಝಿಯಾದ್ ಸಹಕರಿಸಿದರು.ಸಮಾಪನಾ ದಿನ ತಬರ್ರುಕ್ ವಿತರಿಸಲಾಯಿತು.