Share To

Sunday, 27 November 2016

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಇಲೆಕ್ಷನ್ ಆಫೀಸರುಗಳಿಂದ ಎಸ್ಸೆಸ್ಸೆಫ್ ಉಳ್ಳಾಲ ಅಕ್ಕರೆಕೆರೆ ಶಾಖೆಗೆ ಭೇಟಿ

ಎಸ್ ಎಸ್ ಎಫ್ ಸದಸ್ಯತನ ಅಭಿಯಾನಕ್ಕೆ ಆವೇಶ ತುಂಬುತ್ತಾ ಶಾಖಾ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಶಾಖಾ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಉಳ್ಳಾಲ ಡಿವಿಷನಿನ ಅಧೀನದಲ್ಲಿರುವ ವಿವಿಧ ಶಾಖೆಗಳಿಗೆ ಭೇಟಿ ನೀಡಿದ ಉಳ್ಳಾಲ ಡಿವಿಷನಿನ ಪ್ರ ಕಾರ್ಯದರ್ಶಿ ಹಾಗು ಡಿವಿಷನ್ ಇಲೆಕ್ಷನ್ ಆಫಿಸರ್ ಇಸ್ಮಾಯಿಲ್ ಮಾಸ್ಟರ್,ಹಾಗು ಡಿವಿಷನ್ ಇಲೆಕ್ಷನ್ ಆಫೀಸರ್ಸ್ ಗಳಾದ ಸಯ್ಯಿದ್ ಖುಬೈಬ್ ತಂಗಳ್ ಮತ್ತು ಜಾಫರ್ ಅಳೇಕಲ ಉಳ್ಳಾಲದ ಅಕ್ಕರೆಕೆರೆ ಶಾಖಾ ನಾಯಕರನ್ನು ಇಂದು ನವಾಝ್ ಸಖಾಫಿ ಉಳ್ಳಾಲ ಇವರ ನಿವಾಸದಲ್ಲಿ ಭೇಟಿಯಾದರು.
             ಅಕ್ಕರೆಕೆರೆ ಶಾಖಾಧ್ಯಕ್ಷ ನವಾಝ್ ಸಖಾಫಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯಲ್ಲಿ ನಡೆಸಿದ ಸದಸ್ಯತನ ಅಭಿಯಾನದ ಮಾಹಿತಿ ನೀಡಿದರು.ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಅಳೇಕಲ ಪ್ರಾಸ್ತಾವಿಕವಾಗಿ ಮಾತನಾಡಿ ಇಂದು ಮುಸ್ಲಿಂ ಯುವ ಸಮೂಹವು ಕೆಡುಕಿನತ್ತ ವಾಲುತ್ತಿರುವಾಗ ಅವರಿಗೆ ಒಳಿತಿನ ಹಾದಿ ತೋರಿಸಿ ಕೊಡುವ ಸಂಘಟನೆಯಿದ್ದರೆ ಅದು ಎಸ್ಸೆಸ್ಸೆಫ್ ಮಾತ್ರವಾಗಿದೆ ಅಂದರು.ಡಿವಿಷನ್ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಅಕ್ಕರೆಕೆರೆ ಶಾಖಾ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸುತ್ತಾ ಇನ್ನಷ್ಟು ಸದಸ್ಯರನ್ನು ಎಸ್ಸೆಸ್ಸೆಫ್ ನಲ್ಲಿ ಸೇರ್ಪಡೆಯಾಗಿಸುವಿಕೆಯ ಕುರಿತು ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಉಳ್ಳಾಲ ಸೆಕ್ಟರ್ ಅಧ್ಯಕ್ಷ ಹಾಗು ಡಿವಿಷನ್ ಎಲೆಕ್ಷನ್ ಆಫೀಸರೂ ಆದ ಸಯ್ಯಿದ್ ಖುಬೈಬ್ ತಂಗಳ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಹಿರಿಯ ಸುನ್ನೀ ಮೇಧಾವಿ ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಸದಸ್ಯರೂ ಆದ ಹಸನ್ ಹಾಜಿ,ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಫರೀದ್ ನಗರ,ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರ ಕಾರ್ಯದರ್ಶಿ ಶರೀಫ್ ಅಕ್ಕರೆಕೆರೆ ಹಾಗು ಶಾಖಾ ಸದಸ್ಯ ಆಸಿಫ್ ಉಪಸ್ಥಿತರಿದ್ದರು.ಸೆಕ್ಟರ್ ಇಲೆಕ್ಷನ್ ಆಫೀಸರ್ ಸಿರಾಜುದ್ದೀನ್ ಸ್ವಾಗತಿಸಿ ಮುಝಯ್ಯಿನ್ ಅಕ್ಕರೆಕೆರೆ ಧನ್ಯವಾದಗೈದರು.

No comments:

Post a Comment