ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಆಶ್ರಯದಲ್ಲಿ ಸ್ವಲಾತುನ್ನಾರಿಯಃ ಮಜ್ಲಿಸ್ ಮತ್ತು ಮಾದಕ ಮುಕ್ತ ತರಬೇತಿ ಶಿಬಿರ ಶಾಖಾಧ್ಯಕ್ಷರಾದ ಶಾಹುಲ್ ಹಮೀದ್ ಜೌಹರಿಯವರ ಅಧ್ಯಕ್ಷತೆಯಲ್ಲಿ ಅಕ್ಕರೆಕೆರೆಯ ಶಾಖಾ ಕಛೇರಿಯಲ್ಲಿ ನಡೆಯಿತು.
ಸ್ವಲಾತುನ್ನಾರಿಯಃ ಮಜ್ಲಿಸಿನ ನೇತ್ರತ್ವವನ್ನು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ವಹಿಸಿದರು. ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಮಾಜಿ ಅಧ್ಯಕ್ಷರಾದ ಉಸ್ಮಾನ್ ಸಖಾಫಿ ಪೊಳಲಿ ಕುರಾನ್ ತರಗತಿಯನ್ನು ನಡೆಸಿ ಸೂರತುಲ್ ಇಖ್ಲಾಸಿನ ವಿವಿಧ ಹೆಸರುಗಳನ್ನು ತಿಳಿಸಿ ಅದರ ಹಿನ್ನೆಲೆಯನ್ನು ವಿವರಿಸಿದರು. ತ್ವಯ್ಬಃ ಇಸ್ಲಾಮಿಕ್ ರಿಸರ್ಚ್ ಸೆಂಟರ್ ಇದರ ಲೈಬ್ರರಿಗೆ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ವತಿಯಿಂದ ಪುಸ್ತಕಗಳನ್ನು ತ್ವಯ್ಬಃ ಸೆಂಟರ್ ಇದರ ಸಂಚಾಲಕರಾದ ಮುಸ್ತಫ ಮಾಸ್ಟರ್ ಇವರಿಗೆ ಹಸ್ತಾಂತರಿಸಲಾಯಿತು. ಬಳಿಕ ಮಾದಕ ಮುಕ್ತ ಸಮಾಜವನ್ನು ಹೇಗೆ ರೂಪಿಸಬಹುದು ಎಂಬ ವಿಷಯದಲ್ಲಿ ಮುಸ್ತಫ ಮಾಸ್ಟರ್ ತರಗತಿ ನಡೆಸಿದರು.
ಸಭೆಯಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್,ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಎಸ್ ಬಿ ಎಸ್ ಸಂಚಾಲಕರಾದ ಇರ್ಫಾನ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಮಾಜಿ ಕೊಶಾಧಿಕಾರಿಯಾದ ಅಬ್ದುಲ್ ಮಜೀದ್, ಎಸ್ ಬಿ ಎಸ್ ಅಧ್ಯಕ್ಷರಾದ ಶಬೀಬ್ ತಂಗಳ್, ಫಾಝಿಲ್ ಹಾಗು ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು. ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್ ಸ್ವಾಗತಿಸಿದರು. ಶಾಖಾ ಕೋಶಾಧಿಕಾರಿ ಸಿರಾಜ್ ಕಾರ್ಯಕೃಮ ನಿರೂಪಿಸಿದರು.
Friday, 27 October 2017
ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಆಶ್ರಯದಲ್ಲಿ ಸ್ವಲಾತುನ್ನಾರಿಯಃ ಮಜ್ಲಿಸ್ ಮತ್ತು ಮಾದಕ ಮುಕ್ತ ತರಬೇತಿ ಶಿಬಿರ
Subscribe to:
Post Comments (Atom)
No comments:
Post a Comment