ಎಸ್ಸೆಸ್ಸೆಫ್ ಉಳ್ಳಾಲ ಕೋಡಿ ದೋಟ ಶಾಖೆಯ ಆಶ್ರಯದಲ್ಲಿ ಎಸ್ ಬಿ ಎಸ್ ಮಕ್ಕಳ ಬಾಲ ಸಂಗಮ ಡ್ರೀಮ್ ಜಿಕೆ 2017 ಶಾಖಾಧ್ಯಕ್ಷರಾದ ಹಾಶಿರ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ಕೋಡಿಯ ಶಾಖಾ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಖಾ ಕೋಶಾಧಿಕಾರಿ ಅತೀಖ್ ಕೋಡಿ ಉದ್ಘಾಟಿಸಿದರು. ಶಾಖಾಧ್ಯಕ್ಷ ಹಾಶಿರ್ ಮನದ ಮಾತು ತಿಳಿಸಿದರು. ಆಝಾದ್ ನಗರ ಶಾಖಾಧ್ಯಕ್ಷ ಹಾಫಿಝ್ ಮುಈನ್ ಉಸ್ತಾದ್, ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್ ಕೋಟೆಪುರ, ಮುಸ್ತಫ ಮದನಿ ಮುಡಿಪು, ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಹಾಗು ಎಸ್ ಬಿ ಎಸ್ ಉಳ್ಳಾಲ ಸೆಕ್ಟರ್ ಸಂಚಾಲಕ ಮುಹಾಝ್ ತರಗತಿ ನಡೆಸಿದರು. ಡ್ರೀಮ್ ಜಿಕೆಯ ಅಂಗವಾಗಿ ಮಕ್ಕಳಿಗೆ ಕ್ವಿಝ್, ಮೆಮೊರಿ ಟೆಸ್ಟ್, ಕಿರಾಅತ್, ರಿವರ್ಸ್ ಕೌಂಟಿಂಗ್ ಹಾಗು ಇಸ್ಲಾಮಿಕ್ ಹಾಡುಗಳ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ಮಕ್ಕಳಿಗೆ ಪ್ರಥಮ ಹಾಗು ದ್ವಿತೀಯ ಬಹುಮಾನವನ್ನು ವಿತರಿಸಲಾಯಿತು ಹಾಗು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹ ಬಹುಮಾನವನ್ನು ನೀಡಲಾಯಿತು.
ಬಳಿಕ ಎಸ್ ಬಿ ಎಸ್ ಇದರ ನೂತನ ಸಮಿತಿಯನ್ನು ರಚಿಸಲಾಯಿತು. ನೂತನಾಧ್ಯಕ್ಷರಾಗಿ ಸಾಹಿಲ್ ಯೂಸುಫ್, ಪ್ರಧಾನ ಕಾರ್ಯದರ್ಶಿಯಾಗಿ ಝಾಫಿಖ್ ರವರನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಶಾಖಾ ಪ್ರಧಾನ ಕಾರ್ಯದರ್ಶಿ ಹಫೀಝ್ ಕೋಡಿ, ಸಾದಾತ್ ಫಂಡ್ ಅಸೋಸಿಯೇಷನ್ ಕನ್ವೀನರ್ ಸಯ್ಯಿದ್ ಜವಾದ್ ತಂಗಳ್ ಉಪಸ್ಥಿತರಿದ್ದರು.
Tuesday, 16 May 2017
ಎಸ್ಸೆಸ್ಸೆಫ್ ಉಳ್ಳಾಲ ಕೋಡಿ ದೋಟ ಶಾಖೆಯ ಆಶ್ರಯದಲ್ಲಿ ಎಸ್ ಬಿ ಎಸ್ ಮಕ್ಕಳ ಬಾಲ ಸಂಗಮ ಡ್ರೀಮ್ ಜಿಕೆ 2017
Subscribe to:
Post Comments (Atom)
No comments:
Post a Comment