ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ವಿದ್ಯಾರ್ಥಿಗಳ ಸಂಗಮ SBS ಸ್ಲೇಟ್ ಪ್ರೋಗ್ರಾಮ್ ಸೆಕ್ಟರ್ ಉಪಾಧ್ಯಕ್ಷರಾದ ಮುಹಮ್ಮದ್ ಮದನಿ ಹಳೆಕೋಟೆ ಇವರ ಅಧ್ಯಕ್ಷತೆಯಲ್ಲಿ ಇವರ ದುವಾದೊಂದಿಗೆ ಒಂಭತ್ತುಕೆರೆ ಶಾಲೆಯಲ್ಲಿ ನಡೆಯಿತು. ಎಸ್ ಬಿ ಎಸ್ ಉಳ್ಳಾಲ ಡಿವಿಷನ್ ಕನ್ವೀನರ್ ಮುಸ್ತಫ ಝುಹ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಸ್ತಫ ಮಾಸ್ಟರ್ ತರಗತಿ ನಡೆಸಿದರು. ಉಳ್ಳಾಲ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಯುವ ನಾಯಕ ಇಲ್ಯಾಸ್ ಬೊಟ್ಟು, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್, ಸೆಂಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಹಾಜರಾತಿಯಲ್ಲಿ SBS ಅಕ್ಕರೆಕೆರೆ ಶಾಖೆ ಪ್ರಥಮ ಸ್ಥಾನ ಪಡೆಯಿತು. SBS ಉಳ್ಳಾಲಬೈಲು ಬೊಟ್ಟು ಶಾಖೆ ದ್ವಿತೀಯ ಸ್ಥಾನ ಪಡೆಯಿತು. ಶಾಖಾ ಮಟ್ಟದಲ್ಲಿ ನಡೆದ SBS ಡ್ರೀಮ್ ಜಿಕೆ ಕಾರ್ಯಕ್ರಮದಲ್ಲಿ ಉಳ್ಳಾಲಬೈಲು ಬೊಟ್ಟು ಪ್ರಥಮ ಸ್ಥಾನ ಪಡೆಯಿತು. ಕೋಡಿ ದೋಟ ಶಾಖೆ ದ್ವಿತೀಯ ಸ್ಥಾನ ಪಡೆಯಿತು. ಶಾಖಾ ಮಟ್ಟದ ಕನ್ವೀನರುಗಳಲ್ಲಿ ಅತ್ಯುತ್ತಮ ಕನ್ವೀನರಾಗಿ ಅಕ್ಕರೆಕೆರೆ ಶಾಖೆಯ ಇರ್ಫಾನ್ ಆಯ್ಕೆಯಾದರು. ಬಳಿಕ ಪ್ರಶಸ್ತಿ ವಿತರಣೆ ನಡೆಯಿತು. ಇದೇ ಸಂದರ್ಭದಲ್ಲಿ ಉಳ್ಳಾಲ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಯುವ ನಾಯಕ ಇಲ್ಯಾಸ್ ಬೊಟ್ಟು ಇವರಿಗೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಸನ್ಮಾನಿಸಲಾಯಿತು.
SBS ಉಳ್ಳಾಲ ಸೆಕ್ಟರ್ ಕನ್ವೀನರ್ ಮುಹಾಝ್ ಮೇಲಂಗಡಿ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಹಾಶಿಂ ಮೇಲಂಗಡಿ, ಫವಾಝ್ ಆಝಾದ್ ನಗರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಸ್ವಾಗತಿಸಿ ಕೊನೆಗೆ ಧನ್ಯವಾದಗೈದರು.
Tuesday, 23 May 2017
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ವಿದ್ಯಾರ್ಥಿಗಳ ಸಂಗಮ SBS ಸ್ಲೇಟ್ ಪ್ರೋಗ್ರಾಮ್
Subscribe to:
Post Comments (Atom)
No comments:
Post a Comment