Share To

Monday, 29 May 2017

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಶಾಲಾ ಬುಕ್ ವಿತರಣಾ ಕಾರ್ಯಕ್ರಮ

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಶಾಲಾ ಬುಕ್ ವಿತರಣಾ ಕಾರ್ಯಕ್ರಮ ಸೆಕ್ಟರ್ ಉಪಾಧ್ಯಕ್ಷರಾದ ಅತೀಖ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕಛೇರಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷರಾದ ಅಬೂ ಅನಸ್ ಜಮಾಲ್ ಉಸ್ತಾದ್ ದುವಾ ನೆರವೇರಿಸಿದರು. ಸಿರಾಜ್ ಉಸ್ತಾದ್ ಚಾಲಿಯಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಬೂ ಅನಸ್ ಜಮಾಲ್ ಉಸ್ತಾದ್ ಮಾತನಾಡಿ ಬಡ ಕುಟುಂಬದ ಶಾಲಾ ಮಕ್ಕಳಿಗೆ ಸ್ಕೂಲ್ ಬುಕ್ ಮುಂತಾದ ಅವರ ಕಲಿಕೆಗೆ ಆವಶ್ಯಕವಾಗುವ ವಸ್ತುಗಳನ್ನು ನೀಡಿ ಅವರ ಕಲಿಕೆಯುವಿಕೆಗೆ ಉತ್ತೇಜನ ನೀಡುವುದು ನಮ್ಮ ಬಾಧ್ಯತೆಯಾಗಿದೆ ಎಂದು ತಿಳಿಸಿ ಶಾಲಾ ಪುಸ್ತಕ ವಿತರಣೆಗೆ ಸಹಾಯ ಸಹಕಾರ ನೀಡಿದ ಸರ್ವರಿಗೂ ಪ್ರಾರ್ಥನೆ ನೆರವೇರಿಸಿದರು. ಬಳಿಕ ಅತೀಖ್ ಕೋಡಿ ಅಧ್ಯಕ್ಷತಾ ಭಾಷಣ ಮಾಡಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ ಜಿ ಹನೀಫ್ ಹಾಜಿ ಆಶಂಶಾ ಭಾಷಣ ಮಾಡಿದರು.
ಈ ಕಾರ್ಯಕೃಮದಲ್ಲಿ ಎಸ್ ವೈ ಎಸ್ ಕೋಡಿ ದೋಟ ಬ್ರಾಂಚ್ ಉಪಾಧ್ಯಕ್ಷರಾದ ಅಬ್ದುಲ್ ಅಝೀಝ್ ಸೀ ರೋಡ್ ಕೋಡಿ, ಉಳ್ಳಾಲ ನಗರಸಭಾ ಸದಸ್ಯ ಶೌಕತ್ ಆಝಾದ್ ನಗರ, ವಾರ್ತಾಭಾರತಿ ಜಾಹೀರಾತು ವಿಭಾಗದ ನಿರ್ವಹಣಾಧಿಕಾರಿ ಮೆಹರಲಿ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಜತೆ ಕಾರ್ಯದರ್ಶಿ ಶರೀಫ್ ಅಕ್ಕರೆಕೆರೆ, ಎಸ್ಸೆಸ್ಸೆಫ್ ಆಝಾದ್ ನಗರ ಕೋಶಾಧಿಕಾರಿ ಹಾಶಿಂ ಆಝಾದ್ ನಗರ ಹಾಗು ಫವಾಝ್ ಉಪಸ್ಥಿತರಿದ್ದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮೀಡಿಯ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಸ್ವಾಗತಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಜತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಕಾರ್ಯಕ್ರಮ ನಿರೂಪಿಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಧನ್ಯವಾದಗೈದರು

No comments:

Post a Comment