ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಡಿಸೆಂಬರ್ 18 ರಂದು ಹತ್ತನೇ ವರ್ಷದ ಮೀಲಾದ್ ಜಾಥಾ ಹಾಗೂ ಇಶ್ಕೇ ಮುಸ್ತಫ ಕಾಂಫರೆನ್ಸ್ ಅದ್ಧೂರಿಯಾಗಿ ನಡೆಸಲು ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ನ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮೀಲಾದ್ ಜಾಥಾ ಡಿಸೆಂಬರ್ 18 ಆದಿತ್ಯವಾರ ಮಧ್ಯಾಹ್ನ 2-30 ಗಂಟೆಗೆ ತೊಕ್ಕೋಟುವಿನಿಂದ ಉಳ್ಳಾಲ ದರ್ಗಾದವರೆಗೆ ಸಾಗಲಿದೆ ಎಂದು ಸಯ್ಯಿದ್ ಖುಬೈಬ್ ತಂಗಳ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಸಭೆಯಲ್ಲಿ ರಿಲೀಫ್ ಚೇರಮಾನ್ ಮನ್ಸೂರ್ ಹಳೆಕೋಟೆ,ಇಶಾರ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ,ಮೀಲಾದ್ ಸಮಿತಿ ನಿರ್ದೇಶಕ ಮುಹಮ್ಮದ್ ಮದನಿ ಹಳೆಕೋಟೆ,ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ,ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ,ಸಿರಾಜ್ ಮೇಲಂಗಡಿ,ನೌಫಲ್ ಕೋಟೆಪುರ,ಮೆಹರಲಿ ಪೇಟೆ,ಇಕ್ಬಾಲ್ ಒಂಭತ್ತುಕೆರೆ,ರಶೀದ್ ಕೋಟೆಪುರ ಹಾಗು ಇರ್ಫಾನ್ ಕೋಟೆಪುರ ಉಪಸ್ಥಿತರಿದ್ದರು.
Friday, 14 October 2016
ಡಿಸೆಂಬರ್ 18-2016-ಮೀಲಾದ್ ರ್ಯಾಲಿ
Subscribe to:
Post Comments (Atom)
No comments:
Post a Comment