ಎಸ್ ಎಸ್ ಎಫ್ ಎಂಬುದು ಮಾದರೀ ಸಂಘಟನೆಯಾಗಿದೆ.ಒಬ್ಬ ಮುಸ್ಲಿಮನು ಮೈಗೂಡಿಸಿಕೊಳ್ಳಬೇಕಾದ ಪ್ರತಿಯೊಂದು ವಿಷಯಗಳು ಎಸ್ ಎಸ್ ಎಫ್ ತಿಳಿಸಿಕೊಡುತ್ತದೆ.ಅದರಲ್ಲಿ ಸೇರಿದವನು ಒಮ್ಮೆಯೂ ದಾರಿತಪ್ಪಲಾರ ಎಂದು ಮಳ್ಹರ್ ದಅವಾ ಕಾಲೇಜು ಪ್ರಾಂಶುಪಾಲರಾದ ಅನಸ್ ಸಖಾಫಿ ಸಿದ್ದೀಖಿ ಶಿರಿಯ ತಿಳಿಸಿದರು.ಅವರು ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಉಳ್ಳಾಲ ಪೇಟೆ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಮುಲಾಖಾತ್ ಕ್ಯಾಂಪ್ ನಲ್ಲಿ ಭಾಗವಹಿಸಿ ಸಾಂಘಿಕ ತರಗತಿ ನಡೆಸಿದರು.ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಅಧ್ಯಕ್ಷತೆ ವಹಿಸಿದರು.ಕೋಟೆಪುರ ಶಾಖಾ ಕಾರ್ಯದರ್ಶಿ ಮುಝಮ್ಮಿಲ್ ಉಸ್ತಾದ್ ಕೋಟೆಪುರ ಖಿರಾಅತ್ ಪಠಿಸಿದರು.ಸೆಕ್ಟರ್ ಉಪಾಧ್ಯಕ್ಷ ಮೌಲಾನ ನವಾಝ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿದರು.ನಮ್ಮ ಪ್ರತೀ ಚಲನವಲನ, ನಡೆನುಡಿಗಳಲ್ಲಿ ಇಸ್ಲಾಮಿನ ಸುಂದರ ಆಶಯಾದರ್ಶಗಳನ್ನು ಆಂತರಿಕವಾಗಿಯೂ ಬಾಹ್ಯವಾಗಿಯೂ ಪ್ರಕಟಗೊಳಿಸಬೇಕೆಂದು ಡಿಕೆಎಸ್ಸಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಅರಮಿಕ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇಶಾರ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ ಹಾಗೂ ಎಸ್ ಎಸ್ ಎಫ್ ಉಳ್ಳಾಲ ಡಿವಿಶನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ನ ಕಾರ್ಯವೈಖರಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.ಇಶಾರ ಪಾಕ್ಷಿಕದ ಅಭಿಯಾನ ರಾಜ್ಯದಾದ್ಯಂತ ನಡೆಯುತ್ತಿದ್ದು ಅದನ್ನು ಉಳ್ಳಾಲದ ಪ್ರತಿಯೋರ್ವನಿಗೂ ತಲುಪುವ ಕಾರ್ಯವನ್ನು ಕೈಗೊಳ್ಳಬೇಕೆಂದು ತಿಳಿಸಿದರು.ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್,ಪ್ರಧಾನ ಕಾರ್ಯದರ್ಶಿ ತ್ವಾಹಿರ್ ಹಾಜಿ ರಿಲೀಫ್ ಫೌಂಡೇಶನ್ ಇದರ ಚಾರಿಟಿ ಬಾಕ್ಸ್ ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ,ರಿಲೀಫ್ ಕೋಶಾಧಿಕಾರಿ ಫಾರೂಖ್ ಹಿಬ,ಇಶಾರ ಕಾರ್ಯದರ್ಶಿ ಅಬ್ದುಲ್ ಘನಿ ಹಾಗು ರೀಡ್ ಪ್ಲಸ್ ಕಾರ್ಯನಿರ್ವಾಹಕ ಹನೀಫ್ ಬೊಟ್ಟುಗೆ ನೀಡಿ ಬಿಡುಗಡೆಗೊಳಿಸಿದರು.
ಅಲ್ ಅಮೀನ್ ರಿಲೀಫ್ ಫೌಂಡೇಶನ್ ಇದರ ಚೇರಮಾನ್ ಮನ್ಸೂರ್ ಹಳೆಕೋಟೆ,ಮುಕ್ಕಚ್ಚೇರಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಮುಕ್ಕಚ್ಚೇರಿ,ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಮುಸ್ತಫ ಮಾಸ್ಟರ್ ಉಳ್ಳಾಲ,ಸೆಕ್ಟರ್ ಉಪಾಧ್ಯಕ್ಷರುಗಳಾದ ಮುಹಮ್ಮದ್ ಮದನಿ ಹಾಗು ಶಬೀರ್ ಪೇಟೆ,ಸೆಕ್ಟರ್ ಕಾರ್ಯದರ್ಶಿಗಳಾದ ಸಿರಾಜ್ ಮೇಲಂಗಡಿ ಹಾಗು ಹಫೀಝ್ ಕೋಡಿ,ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ನೌಫಲ್ ಕೋಟೆಪುರ,ಎಸ್ ಬಿ ಎಸ್ ನಿರ್ದೇಶಕ ಅಹ್ಸನ್ ಒಂಭತ್ತುಕೆರೆ,ತ್ವಾಹ ಕೋಟೆಪುರ,ತೌಸೀಫ್ ಒಂಭತ್ತುಕೆರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿ ಸೆಕ್ಟರ್ ಜತೆ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
Friday, 14 October 2016
ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಮುಲಾಖಾತ್ ಕ್ಯಾಂಪ್
Subscribe to:
Post Comments (Atom)
No comments:
Post a Comment