ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಮತ್ತು ಮೇಲಂಗಡಿ ಶಾಖೆ ಜಂಟಿ ಆಶ್ರಯದಲ್ಲಿ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ರವರ ಅನುಸ್ಮರಣಾ ಪ್ರಯುಕ್ತ ಮದನಿ ಮೌಲಿದ್ ಮಜ್ಲಿಸ್ ಮತ್ತು ಬ್ರಹತ್ ಪ್ರಾರ್ಥನಾ ಸಂಗಮ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ನೇತ್ರತ್ವದಲ್ಲಿ ಎಸ್ ಎಸ್ ಎಫ್ ಮೇಲಂಗಡಿ ಶಾಖೆಯ ಫಿರ್ದೌಸ್ ವರಾಂಡದಲ್ಲಿ ನಡೆಯಿತು.
ಬಶೀರ್ ಸಖಾಫಿ ಉಳ್ಳಾಲ ಮದನಿ ಮೌಲಿದ್ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಿದರು.ಪ್ರಾರ್ಥನಾ ಸಂಗಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮಾಜಿ ಅಧ್ಯಕ್ಷರಾದ ಮುಸ್ತಫ ಮದನಿ ಉಳ್ಳಾಲ ಎಸ್ಸೆಸ್ಸೆಫ್ಫಿನ ಗತಕಾಲದ ಅನುಭವಗಳನ್ನು ಹಂಚಿಕೊಂಡರು.ಅಕ್ಟೋಬರ್ 26-2016 ಕ್ಕೆ ಎಸ್ಸೆಸ್ಸೆಫ್ ಉಳ್ಳಾಲ ರಚನೆಗೊಂಡು ಮೂವತ್ತು ವರ್ಷಗಳು ತುಂಬಿದ್ದು ಕರ್ನಾಟಕದಲ್ಲಿ ಎಸ್ಸೆಸ್ಸೆಫ್ ಅಧಿಕ್ರತವಾಗಿ ರಚನೆಗೊಳ್ಳುವುದಕ್ಕಿಂತ ಮುಂಚೆಯೇ ಕೇರಳದಲ್ಲಿ ಪ್ರಖ್ಯಾತ ಉಲಮಾಗಳ ಸಾರಥ್ಯದಲ್ಲಿ ಜನ್ಮ ತಾಳಿದ ಎಸ್ಸೆಸ್ಸೆಫ್ಫನ್ನು ಅವಲಂಬಿಸಿ ಕೇವಲ ನಾಲ್ಕು ಜನರ ಮೂಲಕ ಮೂವತ್ತು ವರ್ಷಗಳ ಮುಂಚೆ ಉಳ್ಳಾಲದಲ್ಲಿ ಎಸ್ಸೆಸ್ಸೆಫ್ಫನ್ನು ಪ್ರಾರಂಭಿಸಿದ್ದೇವೆ ಅಂದರು.ಉಳ್ಳಾಲ ಅಳೇಕಲ ಖತೀಬರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉಸ್ತಾದರ ನೇತ್ರತ್ವದಲ್ಲಿ ಎಸ್ಸೆಸ್ಸೆಫ್ಫನ್ನು ಆರಂಭಿಸಲಾಗಿದ್ದು ಹಲವಾರು ಉಲಮಾಗಳು ಸೆಕ್ಟರ್ ಅಧ್ಯಕ್ಷರಾಗಿದ್ದರು ಅಂದರು.
ಪ್ರಾರ್ಥನಾ ಸಂಗಮದಲ್ಲಿ ಉಸ್ಮಾನ್ ಸಖಾಫಿ ಪೊಳಲಿ ಮುಖ್ಯ ಪ್ರಭಾಷಣ ಮಾಡಿದರು.ಹಾಫಿಝ್ ಮುಈನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಅಸ್ಸುಫ್ಫ ಸೆಕ್ಟರ್ ಅಮೀರ್ ಮುಝಮ್ಮಿಲ್ ಉಸ್ತಾದ್ ಕೋಟೆಪುರ ಧನ್ಯವಾದಗೈದರು.
ಸೆಕ್ಟರ್ ಉಪಾಧ್ಯಕ್ಷ ನವಾಝ್ ಸಖಾಫಿ ಉಳ್ಳಾಲ,ಹಾಫಿಝ್ ಅಸ್ಲಂ ಉಳ್ಳಾಲ,ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ,ಮೇಲಂಗಡಿ ಶಾಖಾಧ್ಯಕ್ಷ ಶಫೀಖ್ ಮೇಲಂಗಡಿ,ಕಾರ್ಯದರ್ಶಿ ತಶ್ರೀಫ್,ಸತ್ತಾರ್ ಮೇಲಂಗಡಿ ಹಾಗು ನೌಫಲ್ ಕೋಟೆಪುರ ಉಪಸ್ಥಿತರಿದ್ದರು.
Saturday, 29 October 2016
ಮದನಿ ಮೌಲಿದ್ ಮಜ್ಲಿಸ್ ಮತ್ತು ಪ್ರಾರ್ಥನಾ ಸಂಗಮ..27-10-2016
Subscribe to:
Post Comments (Atom)
No comments:
Post a Comment